ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ
ಬೆಳಗಾವಿ : ರಾಜ್ಯದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕಬ್ಬು ಅರಿಯುವ ಮುನ್ನವೇ ಕಬ್ಬು ಬೆಳೆಗಾರರ ಸಂಪೂರ್ಣ ಬಾಕಿ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಕ್ಕರೆ ಖಾತೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 69 ಕಾರ್ಖಾನೆಗಳ ಪೈಕಿ 61 ಕಾರ್ಖಾನೆಗಳಲ್ಲಿ ಕಬ್ಬು ಅರಿಯುವಿಕೆ ಆರಂಭಿಸಲಾಗಿದೆ. ಈ ಪೈಕಿ 8 ಕಾರ್ಖಾನೆಗಳು 39 ಕೊಟಿ ರೂ. ಬಾಕಿ ಉಳಿಸಿಕೊಂಡಿದೆ. ಇನ್ನುಳಿದಂತೆ ಶೇ. 99.5 ರಷ್ಟು ಕಾರ್ಖಾನೆಗಳು ಬಿಲ್ ಪಾವತಿಸಿವೆ.ಎಫ್.ಆರ್.ಪಿ ಪ್ರಕಾರ ಬಾಕಿಯಿದ್ದ 11948 ಕೋಟಿ ರೂ. ಪೈಕಿ 12055 ಕೋಟಿ ಬಿಲ್ ಪಾವತಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ
Reviewed by Space encyclopaedia
on
December 20, 2019
Rating:
Reviewed by Space encyclopaedia
on
December 20, 2019
Rating:

No comments: